ಹಣತೆಯ ಕೊರಗು…..

ಹಚ್ಚಿಟ್ಟ ಹಣತೆ ಆರಿ ಹೋಗುವುದು
ಗಾಳಿಯ ಸೋಂಕಿಗೆ
ಉಸಿರಿನ ಉಫ್‌ಗೆ
ನೀರೆಯರ ಸೀರೆಯಂಚಿನ ಸ್ಪರ್ಶಕೆ
ದಾರಿದೀಪವಾಗುವ ಹಮ್ಮನು
ಬಿಟ್ಟು ಬಯಲಾದಾಗ
ನಾನು ಉರಿದು ಬೂದಿಯಾಗುತ್ತೇನೆ
‘ಹಚ್ಚೇವು ಕನ್ನಡದ ದೀಪ’
ಎಂಬ ಹಾಡನ್ನು ಕೇಳುತ್ತ
ಕ್ಷಣದಷ್ಟು ತಮದ ಅಲೆಯನು
ಸರಿಸಿ ಬಾರಿದಿಸಿತು ಅಲೆಯನು
ನನ್ನ ಒಳಗಿನ ಉರಿ
ನನ್ನ ದುರ್ಗತಿಗೆ ಮೊರೆಯಿಡುತ್ತದೆ
ಅಲ್ಪ ಅಸ್ಮಿತೆಯ ಚಿತ್ವವನು
ಕಣ್ಣೆದುರು ತಂದಿಡುವಾಗ
ನೋವು ಭಯವಾಗುತ್ತದೆ.

ಅವನ ಮಧುರ ಮಿಲನದ
ಬಯಕೆ ಹೊತ್ತು ಉರಿದು
ಬೆಳಕ ತೋರುವ ಭ್ರಮೆ
ನಿರಸನವಾಗುತ್ತದೆ.
ನನ್ನ ಆರಿಹೋಗುವಿಕೆಯೆ
ಒಂದು ದುರಂತ!

ನಾನು ಆಶೆ ಉತ್ಸಾಹಗಳ ಪುಂಜ
ಪ್ರೇಮಿಗಳ ಮಿಲನದ
ಜ್ಞಾನದಾಹಗಳ ಸಂಕೇತ..
ಮನೆ-ಮನ ಬಾಗಿಲ ದಂಡೆಯಲಿ
ದೇಗುಲದ ದೇವರ ಅಂಗಳದಲಿ
ಉತ್ಸವದ ದೀಪಗಳ ಸಾಲಿನಲಿ
ಸೊಗಸಾಗಿ ಅಂದವಾಗಿ ಮಿಣುಕುತ್ತ
ಗುಂಪಿನ ಬೆಳಕಿನಲಿ ಪಯಣಿಗರ
ಪಥ ದರ್ಶನ ಮಾಡುತ್ತೇನೆಂಬ
ಹೆಮ್ಮೆಯ ಹೊತ್ತು ಇಂಬಿಟ್ಟು
ಹೊಸೆದ ಮನಸುಗಳ
ನಂಬಿಸಿ, ಹುರಿದುಂಬಿಸಿ
ಜೀವಂತವಾಗಿರುವಾಗ
ಎದುರಾಗುವ ಮಂಡೆಲರ ತೊಡಕು
ಕಂಪನ ಹುಚ್ಚಿಸಿ
ಆರುವ ಭಯವನ್ನೆ ಹುಟ್ಟಿಸುತ್ತದಲ್ಲ!
ಎಂದಿನವರೆಗೆ ನಿಮ್ಮ ಮನೆಯ ಬೆಳಗಲಿ?
ನಿಮ್ಮಾಶೆಗಳಿಗೆ ಬಲವಾಗಿ, ಫಲವಾಗಿ
ಎಷ್ಟು ಉರಿಯಲಿ….

ನಾನು ಪಮದಲ್ಲೊಂದು
ಮಿಣುಕುಹುಳ
ಕ್ಷಣಭಂಗುರ ನನ್ನ ಅಸ್ಮಿತೆ
ಆದರೆ ನಾನೊಂದು ಅನಲ ಕಣ
ಅನುಕೂಲ ಪವನ ಬಲದಿಂದ
ಆಕಾಶಕ್ಕೆ ಹಾರಿ, ಅಂಬರವನು ಸುಡಬಲ್ಲೆ
ಪ್ರಿಯೆಯ ಪ್ರೇಮ ಕತೆಗೆ
ನಾಂದಿಯಾಗಿಯೂ, ಮುಳುವಾಗಬಲ್ಲೆ
ಕಣ ಒಂದೆ ಸಾಕು
ಮನೆ ಸುಡಲು, ಮನ ಸುಡಲು

ಸುಂದರ ಕನಕತುಲ್ಯ
ಬೆಳಕಿನಿಂದ ನಾವೆಲ್ಲರ ಮನ
ಸೂರೆಗೊಂಡರೂ
ಭಯಂಕರ ಬೆಂಕಿಯ ಉಂಡೆ,
ಸುಡುವ ಕಾರ್ಯದ ನಾನು
ಯಾರಿಗೂ ದಾರಿದೀಪವಾಗಲಾರೆನು
ನಿಮ್ಮ ವಿಶ್ವಾಸಕ್ಕೆ ಪ್ರೇಮಕೆ
ಪಾತ್ರನಲ್ಲ……!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಲುಗುವ ಹೂವು
Next post ಸಾ ಎಂದೊಡದು ಸ್ವರ್ಗಕ್ಕೆ ಸರಣಿ ಮೆಟ್ಟಿಲಾಗದೇ?

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys